Shikhar Manjunath
"ಅಸ್ಯ ಶ್ರೀ ವಿಷ್ಣೋಃ ಸಹಸ್ರನಾಮಂ ರುದ್ರಶಾಪ ವಿಮೋಚನಾ ಮಂತ್ರಸ್ಯ ಮಹಾದೇವ ಋಷಿಃ | ಅನುಷ್ಟಪ್ ಛಂದಃ | ಶ್ರೀ ರುದ್ರಾನುಗ್ರಹ ಶಕ್ತಿರ್ದೇವತಾ ಸುರೇಶಃ | ಶರಣಂ ಶರ್ಮೇತಿ ಬೀಜಂ ಅನಂತೋ ಹುತಭುಕ್ ಭೋಕ್ತೇsತಿ ಶಕ್ತಿಃ | ಸುರೇಶ್ವರಾಯೇತಿ ಕೀಲಕಂ | ರುದ್ರಶಾಪ ವಿಮೋಚನೇ ವಿನಿಯೋಗಃ
ಅಂಗನ್ಯಾಸ :
ಓಂ ಕ್ಲೀಂ ಹ್ರಾಂ ಅಂಗುಷ್ಟಾಭ್ಯಾಂ ನಮಃ
ಓಂ ಕ್ಲೀಂ ಹ್ರೀಂ ತರ್ಜನೀಭ್ಯಾಂ ನಮಃ
ಓಂ ಕ್ಲೀಂ ಹ್ರೂಂ ಮಧ್ಯಮಾಭ್ಯಾಂ ನಮಃ
ಓಂ ಕ್ಲೀಂ ಹ್ರೈಂ ಅನಾಮಿಕಾಭ್ಯಾಂ ನಮಃ
ಓಂ ಕ್ಲೀಂ ಹ್ರೌಂ ಕನಿಷ್ಠಿಕಾಭ್ಯಾಂ ನಮಃ
ಓಂ ಕ್ಲೀಂ ಹ್ರಂ ಕರತಲಪೃಷ್ಠಾಭ್ಯಾಂ ನಮಃ
ಹೃದಯನ್ಯಾಸ :
ಓಂ ಕ್ಲೀಂ ಹ್ರಾಂ ಹೃದಯಾಯ ನಮಃ
ಓಂ ಕ್ಲೀಂ ಹ್ರೀಂ ಶಿರಸೇ ಸ್ವಾಹಾ
ಓಂ ಕ್ಲೀಂ ಹ್ರೂಂ ಶಿಖಾಯೈ ವಷಟ್
ಓಂ ಕ್ಲೀಂ ಹ್ರೈಂ ಕವಚಾಯಹೂಂ
ಓಂ ಕ್ಲೀಂ ಹ್ರೌಂ ನೇತ್ರತ್ರಯಾಯವೌಷಟ್
ಓಂ ಕ್ಲೀಂ ಹ್ರಂ ಅಸ್ತ್ರಾಯಫಟ್
ಓಂ ಕ್ಲೀಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ, ಓಂ ಭೂರ್ಭುವಸ್ಸುವರೋಂ ಇತಿ ದಿಗ್ಬಂಧಃ ||
(ಅಂಗನ್ಯಾಸ, ಹೃದಯನ್ಯಾಸ ಮಾಡೋಕೆ ಬರದವರು ಮೇಲಿನ ಮಂತ್ರಗಳನ್ನು ಎರಡು ಬಾರಿ ಹೇಳಿಕೊಳ್ಳಿ, ಸ್ತ್ರೀಯರು ಸಹ 2 ಬಾರಿ ಹೇಳಿಕೊಳ್ಳಿ)
ಧ್ಯಾನಂ :
"ತಮಲಶ್ಯಾಮಲತನುಂ ಪೀತಕೌಶೇಯವಾಸಂ |
ವರ್ಣಮೂರ್ತಿಮಯಂ ದೇವಂ ಧ್ಯಾಯೇನ್ನಾರಾಯಣ ವಿಭುಂ ||"
ಜಪ :
ಓಂ ಕ್ಲೀಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಕ್ಲೀಂ ಓಂ
( ಈ ಜಪ ಮಂತ್ರವನ್ನು 100 ಸಾರಿ ಜಪಿಸಬೇಕು, ತೀರಾ ಅಸಾಧ್ಯವಾದರೆ ೫೪ ಬಾರಿಯಾದರೂ ಜಪಿಸಿ)
ಪ್ರಾರ್ಥನೆ :
"ಶ್ರೀ ವಿಷ್ಣೋ ಸಹಸ್ರನಾಮ ಸ್ತವೋ ರುದ್ರಶಾಪದ್ವಿಮುಕ್ತೋ ಭವ ||"
ಎಂದು ಹೇಳುತ್ತಾ ೩ ಸಲ ಹೇಳಿ "ಕ್ಷೀರಾರ್ಘ್ಯ" ಕೊಡಬೇಕು...
ಯುವಕನೊಬ್ಬನು ಭಗವಾನರನ್ನು,(Ramana Maharshi) "ಕೈಲಾಸವಿರುವುದೆಲ್ಲಿ?"ಎಂದು ಕೇಳಿದನು. ಅದಕ್ಕೆ ಭಗವಾನರು,"ಓಹೋ!ಕೈಲಾಸವೇ? ನಾವು ಎಲ್ಲಿದ್ದೇವೋ ಕೈಲಾಸವೂ ಅಲ್ಲಿಯೇ ಇದೆ. ಆದರೆ ಮೊದಲು ನಾವು ಎಲ್ಲಿದ್ದೇವೆ ಹೇಳಿ?"ಎಂದರು. ಆತನು "ಅದಲ್ಲ ಸ್ವಾಮಿ!ಈ ಪುರಾಣದಕಥೆಯಲ್ಲಿ ಬಂದಿರುವ ಆ ಕೈಲಾಸವು ನಿಜವಾಗಿ ಇದೆಯೇನು? ಇದ್ದರೆ ಅದೆಲ್ಲಿದೆ? ಕೃಪೆ ಮಾಡಿ ಅದನ್ನು ಸರಿಯಾಗಿ ತಿಳಿಸಬೇಕು "ಎಂದನು. ಅದಕ್ಕೆ ಭಗವಾನರು,"ಈಗತಾನೇ ತಿಳಿಸಿದೆನಲ್ಲ!ನಾವು ಈಗ ಇಲ್ಲಿಗೆ ಬಂದಿದ್ದೇವೆ. ಇಲ್ಲಿಂದ ಬೇರೊಂದು ಜಾಗಕ್ಕೆ ಹೋಗುತ್ತೇವೆ ಇವೆಲ್ಲವೂ ನಿಜವೆಂದಾದರೆ ಅದೂ ನಿಜವೇ. ಅಲ್ಲಿಯೂ ಯಾವುದೋ ಒಂದು ಆಸನದ ಮೇಲೆ ಒಬ್ಬ ಸ್ವಾಮಿಯು ಕುಳಿತುಕೊಂಡಿರುತ್ತಾನೆ. ಸುತ್ತಲೂ ಭಕ್ತರು ಹೀಗೆಯೇ ಕುಳಿತಿರುತ್ತಾರೆ. ಅವರು ಏನಾದರೂ ಹೇಳುತ್ತಿರುತ್ತಾರೆ. ಸುತ್ತಲೂ ಭಕ್ತರು ಹೀಗೆಯೇ ಕೇಳುತ್ತಿರುತ್ತಾರೆ ಎಲ್ಲೆಲ್ಲೂ ಹೀಗೆಯೇ ಇರುತ್ತದೆ. ಶರೀರದ ದೃಷ್ಟಿಯಿಂದ ನೋಡಿದಾಗ ನಾವು ಎಲ್ಲಿದ್ದರೆ ಅಲ್ಲೇ ಕೈಲಾಸ, ವೈಕುಂಠ ಎಲ್ಲವೂ, ನಮಗೆ ಹುಟ್ಟೂ ಇಲ್ಲ, ಬೆಳವಣಿಗೆಯೂ ಇಲ್ಲ, ಸಾವು ಇಲ್ಲ ಮತ್ತು ಯಾವ ಬದಲಾವಣೆಯೂ ಇಲ್ಲ ಎಂದು ಯಾವಾಗ ನಮ್ಮ ಅರಿವಿಗೆ ಬರುತ್ತದೆಯೋ ಆಗ ಇರುವುದೆಲ್ಲಾ ಕೈಲಾಸವೇ "ಎಂದರು. ಆತನು,"ಅದನ್ನು ಯಾವ ರೀತಿಯಾಗಿ ಅರಿಯುವುದು?"ಎಂದು ಪ್ರಶ್ನಿಸಿದನು. ಭಗವಾನರು "ನಾನು ಇದ್ದೇನೆ ಎಂಬ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ. ಹುಟ್ಟಿದಾಗಲೂ ನೀನು ಇದ್ದೀಯೆ, ಒಂದು ವರ್ಷದ ಮಗುವಾಗಿದ್ದಾಗಲೂ ನೀನಿದ್ದೇ, ಯುವಕನಗಿರುವಾಗಲೂ ನೀನಿರುವೆ ಮತ್ತು ಮುದುಕನಾದಾಗಲೂ ನೀನಿರುತ್ತೀಯೆ. ಹಾಗಾಗಿ ಶರೀರವು ಬದಲಾವಣೆ ಹೊಂದುತ್ತಿದ್ದರೂ ನೀನು ಮಾತ್ರ ಬದಲಾಗಿಲ್ಲ. ನಿನ್ನ ಅಸ್ತಿತ್ವಕ್ಕೆ ನಾಶವಿಲ್ಲ ಎಂಬುದಕ್ಕೆ ಈ ದೃಷ್ಟಾಂತವೊಂದೇ ಸಾಕು."ಎಂದರು
Click here to claim your Sponsored Listing.
Telephone
Website
Address
Bangalore
560002